For the best experience, open
https://m.suddione.com
on your mobile browser.
Advertisement

ಜೈಲು ಪಾಲಾಗಿರುವ ಶಾಸಕ ಮುನಿರತ್ನಗೆ ಜಾಮೀನು ನೀಡಬಾರದು : ಜಯಣ್ಣ ಮೊಗಲಹಳ್ಳಿ ಒತ್ತಾಯ

04:59 PM Sep 19, 2024 IST | suddionenews
ಜೈಲು ಪಾಲಾಗಿರುವ ಶಾಸಕ ಮುನಿರತ್ನಗೆ ಜಾಮೀನು ನೀಡಬಾರದು   ಜಯಣ್ಣ ಮೊಗಲಹಳ್ಳಿ ಒತ್ತಾಯ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 19 : ಗುತ್ತಿಗೆದಾರ ಲಂಚ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ಮನೆಗೆ ಕರೆಸಿಕೊಂಡು ಅವಾಚ್ಯ ಶಬ್ಬಗಳಿಂದ ನಿಂದಿಸಿ ಜೈಲು ಪಾಲಾಗಿರುವ ಆರ್.ಆರ್.ನಗರ ಶಾಸಕ ಮುನಿರತ್ನನಿಗೆ ಜಾಮೀನು ನೀಡಬಾರದೆಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಸ್.ಜಯಣ್ಣ ಒತ್ತಾಯಿಸಿದ್ದಾರೆ.

Advertisement

ಬಿಜೆಪಿ. ಪಕ್ಷ ಅಧಿಕಾರದಲ್ಲಿದ್ದಾಗ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದುದನ್ನು ಸಾಬೀತುಪಡಿಸಿರುವ ಶಾಸಕ ಮುನಿರತ್ನ ಒಲೆಯರಿಗೆ ಅವಮಾನವಾಗುವ ರೀತಿಯಲ್ಲಿ ಗುತ್ತಿಗೆದಾರನನ್ನು ಬೈದಿರುವುದಲ್ಲದೆ ಜಾತಿ ನಿಂದನೆ ಮಾಡಿರುವುದರಿಂದ ಅಟ್ರಾಸಿಟಿ ಕೇಸು ದಾಖಲಿಸಿ ಜೈಲಿನಿಂದ ಹೊರಗೆ ಬರಲು ಅವಕಾಶ ನೀಡಬಾರದು.

Advertisement

ಒಕ್ಕಲಿಗ ಜನಾಂಗಕ್ಕೆ ಸೇರಿದ ಗುತ್ತಿಗೆದಾರನಿಗೆ ಮೂವತ್ತು ಪರ್ಸೆಂಟ್ ಲಂಚ ನೀಡುವಂತೆ ಬೆದರಿಸಿ ಕೊಲೆ ಮಾಡುವುದಾಗಿ ಧಮ್ಕಿ ಹಾಕಿರುವುದು ಯಾವ ನ್ಯಾಯ ?ಇಂತಹ ಶಾಸಕನನ್ನು ಬಿಜೆಪಿ ಯಿಂದ ಉಚ್ಚಾಟಿಸಬೇಕೆಂದು ಜಯಣ್ಣ ಮೊಗಲಹಳ್ಳಿ ಆಗ್ರಹಿಸಿದ್ದಾರೆ.

Tags :
Advertisement