For the best experience, open
https://m.suddione.com
on your mobile browser.
Advertisement

ಹಿರಿಯೂರಿನಲ್ಲಿ ಫೆಬ್ರವರಿ 14, 15ರಂದು ಬಲಿಜ ಸಮುದಾಯ ಭವನ ಉದ್ಘಾಟನೆ

06:24 PM Feb 08, 2024 IST | suddionenews
ಹಿರಿಯೂರಿನಲ್ಲಿ ಫೆಬ್ರವರಿ 14  15ರಂದು ಬಲಿಜ ಸಮುದಾಯ ಭವನ ಉದ್ಘಾಟನೆ
Advertisement

ಸುದ್ದಿಒನ್, ಹಿರಿಯೂರು, ಫೆಬ್ರವರಿ.08  : ನಗರದ ಹೊರವಲಯದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಟ್ರೇಹಳ್ಳಿ ಸಮೀಪದಲ್ಲಿ ನೂತನವಾಗಿ ಬಲಿಜ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

Advertisement
Advertisement

ಸಮುದಾಯ ಭವನ ಉದ್ಘಾಟನೆ ಅಂಗವಾಗಿ ಫೆಬ್ರವರಿ 14 ಹಾಗೂ 15ರಂದು ಲಕ್ಷ್ಮಿವೆಂಕಟೇಶ್ವರ ಸ್ವಾಮಿ, ಮಹಾಗಣಪತಿ ಹಾಗೂ ಸದ್ಗುರು ಯೋಗಿನಾರೇಯಣಸ್ವಾಮಿ ದೇವರ ಬಿಂಬ ಪ್ರತಿಷ್ಠಾಪನ ಮಹೋತ್ಸವ ನಡೆಯಲಿದೆ.

Advertisement

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಗಂಗಾ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದರಾಯ ಚೆನ್ನಯ್ಯ ಸ್ವಾಮೀಜಿ, ಕುಣಿಗಲ್ ಬಸವೇಶ್ವರ ಮಠದ ಧನಂಜಯ ಗುರೂಜಿ ಹಾಗೂ ಚಿಕ್ಕಮಂಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ ನೇತೃತ್ವವಸಲಿದ್ದಾರೆ.

Advertisement
Advertisement

ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್. ತಿಮ್ಮಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಗೋಕುಲ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಎಂ ಆರ್. ಜಯರಾಂ, ಬಾಲ್ಡ್ ವಿನ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ವೇಣುಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷತ್ರಿಯ ಕಾರ್ಯನಿರ್ವಾಹಕ ನಾ. ತಿಪ್ಪೇಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯೂರು ತಾಲೂಕು ಬಲಿಜ ಸಂಘದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement
Tags :
Advertisement