For the best experience, open
https://m.suddione.com
on your mobile browser.
Advertisement

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರಲ್ಲಿ ಹೆಚ್ಚು ಒಲವಿದೆ‌ : ಸೌಭಾಗ್ಯ ಬಸವರಾಜನ್

05:45 PM Jan 19, 2024 IST | suddionenews
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರಲ್ಲಿ ಹೆಚ್ಚು ಒಲವಿದೆ‌   ಸೌಭಾಗ್ಯ ಬಸವರಾಜನ್
Advertisement

Advertisement
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.19 : ಎರಡನೆ ಬಾರಿಗೆ ಬಿಜೆಪಿ.ಜಿಲ್ಲಾಧ್ಯಕ್ಷರಾಗಿ ಮರು ನೇಮಕವಾಗಿರುವ ಎ.ಮುರಳಿರವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‍ರವರು  ಶುಕ್ರವಾರ ಪಕ್ಷದ ಕಚೇರಿಯಲ್ಲಿ ಶಾಲು ಹೊದಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೌಭಾಗ್ಯ ಬಸವರಾಜನ್ ದೇಶದ ಪ್ರಧಾನಿ ನರೇಂದ್ರಮೋದಿರವರು ಕೊಟ್ಟಂತಹ ಯೋಜನೆಗಳನ್ನು ಇಲ್ಲಿಯವರೆಗೂ ಆಳಿದ ಯಾವ ಪ್ರಧಾನಿಯೂ ನೀಡಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರಲ್ಲಿ ಉತ್ತಮ ಒಲವಿದೆ. ಹಾಗಾಂತ ಮೈಮರೆತು ಕೂರುವಂತಿಲ್ಲ. ಕಳೆದ ಅವಧಿಯ ನಿಮ್ಮ ಪಕ್ಷ ಸಂಘಟನೆಯನ್ನು ಗುರುತಿಸಿ ನಾಯಕರು ಎರಡನೆ ಅವಧಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ವಹಿಸಿದ್ದಾರೆ. ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಬೂತ್ ಮಟ್ಟದಲ್ಲಿ ಪ್ರಧಾನಿ ಮೋದಿರವರ ಕಾರ್ಯಕ್ರಮವನ್ನು ಪ್ರತಿ ಮನೆ ಮನೆಗೆ ತಲುಪಿಸಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಪ್ರವಾಸ ಮಾಡುವುದಾಗಿ ತಿಳಿಸಿದರು.

ಬಿಜೆಪಿ. ಉಪಾಧ್ಯಕ್ಷ ಸಂಪತ್‍ಕುಮಾರ್, ನರೇಂದ್ರಹೊನ್ನಾಳ್, ಗುರುನಾಥ್‍ತೊಂಡಮಾಲ್, ದಗ್ಗೆಶಿವಪ್ರಕಾಶ್, ಭಾರ್ಗವಿ ದ್ರಾವಿಡ್, ಗೌರಣ್ಣ, ಒನಕೆ ತಿಪ್ಪೇಸ್ವಾಮಿ, ನಾಗರಾಜ್, ಕಿರಣ್‍ಕುಮಾರ್, ಶಂಭು, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಸದಸ್ಯರುಗಳಾದ ನಾಗರಾಜ್, ಮಂಜುಳ, ಹರೀಶ್‍ಗೌಡ, ಪ್ರಶಾಂತ್‍ನಾಯ್ಕ, ಜಗದೀಶ್, ಕೃಷ್ಣಮೂರ್ತಿ ಈ ಸಂದರ್ಭದಲ್ಲಿದ್ದರು.

Advertisement
Tags :
Advertisement