Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು | ಮೃತ ವ್ಯಕ್ತಿಯ ಪತ್ತೆಗೆ ಮನವಿ

04:55 PM Feb 16, 2024 IST | suddionenews
Advertisement

 

Advertisement

ಸುದ್ದಿಒನ್, ಹಿರಿಯೂರು, ಫೆಬ್ರವರಿ.16 : ತಾಲ್ಲೂಕಿನ ಹರಿಯಬ್ಬೆ ಗ್ರಾಮದ ಭಾರತಮಾತಾ ಶಾಲಾ ಸಮೀಪ ಯಾವುದೋ ಅಪರಿಚಿತ ಕಾರೊಂದು ಅಪಘಾತಪಡಿಸಿದ್ದರಿಂದ 55ದಿಂದ 60 ವರ್ಷದ ವ್ಯಕ್ತಿಯೊಬ್ಬರು  ಮೃತಪಟ್ಟಿದ್ದಾರೆ.

ಅಪಘಾತದ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೃತನು ಅಪರಿಚಿತ ಗಂಡ್ಸಾಗಿದ್ದು, ಹೆಸರು ವಿಳಾಸ ಮತ್ತು ವಾರಸುದಾರರು ಬಂದಿರುವುದಿಲ್ಲ.  ಹಾಗಾಗಿ ಮೃತನ ಗುರುತು ಪತ್ತೆಯಾಗಿರುವುದಿಲ್ಲ. ಮೃತ ವ್ಯಕ್ತಿಯು ದುಂಡು ಮುಖ, ಗೋದಿ ಮೈಬಣ್ಣ ಬಿಳಿ ಕುರುಚಲು ಗಡ್ಡವಿರುತ್ತದೆ.

Advertisement

ತುಂಬು ತೋಳಿನ ಬಿಳಿ ಅಂಗಿ, ಬಿಳಿ ಬನಿಯನ್ ನೀಲಿ ಮತ್ತು ಕಾಫಿ ಬಣ್ಣದ ಚೌಕುಳಿಯ ಪಂಚೆ, ಆಕಾಶ ನೀಲಿ ಬಿಳಿ ಹಾಗೂ ಕಪ್ಪುಗೆರೆಯುಳ್ಳ ಟವಲ್, ಕಂದು ಬಣ್ಣದ ಡ್ರಾಯರ್ (ಚಡ್ಡಿ) ಧರಿಸಿರುತ್ತಾರೆ. ಪ್ರಕರಣದಲ್ಲಿ ವರಸುದಾರರ ಗುರುತು ಕಂಡಲ್ಲಿ ಐಮಂಗಳ ವೃತ್ತ ನಿರೀಕ್ಷಕರು 9480 80313 ಹಾಗೂ ಚಿತ್ರದುರ್ಗ ಕಂಟ್ರೋಲ್ ರೂಂ 9480803100 ನಂಬರ್ ಗೆ ಕರೆ ಮಾಡಿ ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆ ಪಿಎಸ್ಐ ಬಾಹುಬಲಿ ಪಡನಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
chitradurgadeadhiriyurpersonRequestsuddionesuddione newstracingಚಿತ್ರದುರ್ಗಪತ್ತೆಮನವಿಮೃತ ವ್ಯಕ್ತಿಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article