Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು | ಬೈಕ್ ಮತ್ತು ಕಾರು ಡಿಕ್ಕಿ, ಓರ್ವ ಸಾವು

08:03 PM Jun 14, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಜೂ.14 :ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ  ಬೈಕ್ ಸವಾರನ ಸಾವನ್ನಪ್ಪಿದ ಘಟನೆ ತಾಲೂಕಿನ ಬ್ಯಾಡರಹಳ್ಳಿ ಸಮೀಪದ ರಂಗಪ್ಪ ಡಾಬಾ ಬಳಿ ನಡೆದಿದೆ.

Advertisement

ಈ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತನನ್ನು ಬೇತೂರು ಗ್ರಾಮದ ಬಿ.ಎಸ್. ಮಹಂತೇಶ್ ( 38) ಎಂದು ಗುರುತಿಸಲಾಗಿದೆ. ಗಾಯಾಳು ಜಯಲಕ್ಷ್ಮಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಬೇತೂರಿನ ಗ್ರಾಮದ ಬಿ.ಎಸ್. ಮಹಂತೇಶ್ ಮತ್ತು ಈತನ ಹೆಂಡತಿ ಜಯಲಕ್ಷ್ಮಿ ಬೈಕ್ ನಲ್ಲಿ ಹಿರಿಯೂರಿನ ಆಸ್ಪತ್ರೆಗೆ ಬಂದು ಚಿಕಿತ್ಸೆ ಮಾಡಿಸಿಕೊಂಡು ಮರಳಿ ಬೇತೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಸ್ಕಲ್ ಮಾರ್ಗದ ಬ್ಯಾಡರಹಳ್ಳಿ ಗೇಟ್ ಬಳಿ ನಡೆದ ಅಪಘಾತದಲ್ಲಿ ಈ ದುರ್ಘಟನೆ ನಡೆದಿದೆ.

Advertisement

ಅಪರಿಚಿತ ಕಾರೊಂದು ಹೊಡೆದುಕೊಂಡು ಹೋಗಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಮಹಂತೇಶನನ್ನು ಮಾನವೀಯತೆಯಿಂದ ಸಾರ್ವನಿಕರು ಹಿರಿಯೂರಿನ ಆಸ್ಪತ್ರೆಗೆ ತರುವ ದಾರಿ ಮದ್ಯೆ ಅಸುನೀಗಿದ್ದಾನೆ ಎನ್ನಲಾಗಿದೆ. ಹಿಂಬದಿಯ ಗಾಯಾಳು ಜಯಲಕ್ಷ್ಮಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.

ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Tags :
bengalurubikecar collidechitradurgahiriyurone deadsuddionesuddione newsಓರ್ವ ಸಾವುಕಾರು ಡಿಕ್ಕಿಚಿತ್ರದುರ್ಗಬೆಂಗಳೂರುಬೈಕ್ಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article