For the best experience, open
https://m.suddione.com
on your mobile browser.
Advertisement

ಹಿಂದೂ ಮಹಾಗಣಪತಿ : ಅದ್ದೂರಿಯಾಗಿ ನಡೆದ ಬೈಕ್ ರ‌್ಯಾಲಿ

03:11 PM Sep 26, 2024 IST | suddionenews
ಹಿಂದೂ ಮಹಾಗಣಪತಿ   ಅದ್ದೂರಿಯಾಗಿ ನಡೆದ ಬೈಕ್ ರ‌್ಯಾಲಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 26 : ನಗರದ ಹಿಂದೂ ಮಹಾ ಗಣಪತಿಯ ಮಹೋತ್ಸವದ ಅಂಗವಾಗಿ ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಸೆ. 28ರ ಶೋಭಾಯಾತ್ರೆಯ ಅಂಗವಾಗಿ ಬೈಕ್ ರ‌್ಯಾಲಿ ಯನ್ನು ನಡೆಸಲಾಯಿತು.

Advertisement

ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ವೃತ್ತದಿಂದ ಆರಂಭವಾದ ಬೈಕ್ ರ‌್ಯಾಲಿ ಯನ್ನು ಶಾಸಕ ಕೆ.ಸಿ. ವಿರೇಂದ್ರ, ವಿಶ್ವ ಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಉದ್ಘಾಟಿಸಿದರು. ದಾರಿಯುದ್ದಕ್ಕು ಬೈಕ್ ರ‌್ಯಾಲಿ ಯಲ್ಲಿ ಭಕ್ತಾಧಿಗಳು ಜೈ ಶ್ರೀರಾಮ್, ಜೈ ಜೈ ಶ್ರೀರಾಮ ಹಿಂದೂ ಮಹಾ ಗಣಪತಿಕ್ಕಿ ಜೈ ಎಂದು ಕೂಗುತ್ತಾ, ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ತೆಲೆಗೆ ಕೇಸರಿ ಪಟ್ಟಿಯನ್ನು ಕಟ್ಟಿಕೊಂಡು ಕೂರಳಿಗೆ ಕೇಸರಿ ಶಾಲನ್ನು ಹಾಕಿ ಕೊಂಡು ದಾರಿಯಲ್ಲಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು. ಇದರೊಂದಿಗೆ ಹಲವಾರು ಭಕ್ತಾಧಿಗಳು ತೆಲೆ ಕೇಸರಿಯ ಪೇಟವನ್ನು ಧರಿಸಿದ್ದು, ಮತ್ತೇ ಕೆಲವರು ಕೇಸರಿಯ ಜಬ್ಬವನ್ನು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು.

Advertisement

ಬೈಕ್ ರ‌್ಯಾಲಿ ನಗರದ ಕನಕ ವೃತ್ತದಿಂದ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ ವೃತ್ತ, ಆನೇ ಬಾಗಿಲು, ಚಿಕ್ಕಪೇಟೆ, ಏಕನಾಥೇಶ್ವರಿ ಪಾದಗುಡಿ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಜಟ್ ಪಟ್ ನಗರ ಸ್ಟೇಡಿಯಂ ರಸ್ತೆ, ಬಿ,ಡಿ,ರಸ್ತೆ, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತ್ಯ ಗೂಳಿಸಲಾಯಿತು.

ಬೈಕ್ ರ‌್ಯಾಲಿ ಸಾಗಿದ ದಾರಿಯುದ್ದಕ್ಕೂ ಜನತೆ ಅಕ್ಕ-ಪಕ್ಕದಲ್ಲಿ ನಿಂತು ಬೈಕ್ ರ‌್ಯಾಲಿ ಹೋಗುತ್ತಿದ್ದ ದೃಶ್ಯವನ್ನು ಕಣ್ಣು ತುಂಬಿಕೊಂಡರು. ಮಹಿಳೆಯರು ಮಕ್ಕಳು ಎನ್ನದೆ ಎಲ್ಲರೂ ದಾರಿಯ ಪಕ್ಕದಲ್ಲಿ ನಿಂತು ಇದನ್ನು ವಿಕ್ಷಣೆ ಮಾಡಿದರು. ಬೈಕ್ ರ್ಯಾಲಿ ಮಧ್ಯದಲ್ಲಿ ಹಲವಾರು ಬೈಕ್‍ಗಳು ವಿವಿಧ ರೀತಿಯ ಶಬ್ದವನ್ನು ಮಾಡುತ್ತಾ ಜನರನ್ನು ತಮ್ಮತ್ತ ಸೆಳೆಯುವ ಕಾರ್ಯವನ್ನು ಮಾಡಿದರು. ಬೈಕ್ ರ‌್ಯಾಲಿ ಜೊತೆಗೆ ಹಲವಾರು ಜೀಪುಗಳು ಕಾರುಗಳು ಸಹಾ ಭಾಗವಹಿಸಿದ್ದು ಕಂಡು ಬಂದಿತು.

Tags :
Advertisement