For the best experience, open
https://m.suddione.com
on your mobile browser.
Advertisement

ಹಿರಿಯೂರಿನಲ್ಲಿ ಹೃದಯ ವಿದ್ರಾವಕ ಘಟನೆ | ತಂದೆ, ಮಗ ಸಾವು ....!

06:11 PM Dec 14, 2023 IST | suddionenews
ಹಿರಿಯೂರಿನಲ್ಲಿ ಹೃದಯ ವಿದ್ರಾವಕ ಘಟನೆ   ತಂದೆ  ಮಗ ಸಾವು
Advertisement

ಸುದ್ದಿಒನ್, ಹಿರಿಯೂರು, ಡಿಸೆಂಬರ್.14 : ತೋಟದ ಜಮೀನಿನಲ್ಲಿ ಗೋವುಗಳ ಗಂಜು ಸಂಗ್ರಹಿಸಿದ್ದ ಗುಂಡಿಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

Advertisement
Advertisement

ತಾಲೂಕಿನ ಗೌಡನಹಳ್ಳಿಯಲ್ಲಿ ಗುರುವಾರ ನಡೆದಿದ್ದು, ಮೃತರನ್ನು ತಂದೆ ಮಹಾಲಿಂಗಪ್ಪ (52) ಮತ್ತು ಮಗ ಪೃಥ್ವಿ (23) ಎಂದು ಗುರುತಿಸಲಾಗಿದೆ.

Advertisement

ಅಡಿಕೆ ಸಸಿಗಳಿಗಾಗಿ ಸಿಂಪಡಿಸಲು ಹಸುಗಳ ಗಂಜಲನ್ನು ಸುಮಾರು 8 ಅಡಿ ಆಳದ ಗುಂಡಿಯಲ್ಲಿ ಸಂಗ್ರಹಿಸಿದ್ದರು. ಆಕಸ್ಮಿಕವಾಗಿ  ಗಂಜಲಿನ ತೊಟ್ಟಿಗೆ ತಂದೆ ಬಿದ್ದಿದ್ದಾರೆ. ತಂದೆಯನ್ನು ರಕ್ಷಸಿಸಲು ಹೋದ ಮಗ ಪೃಥ್ವಿ ಸಹ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ.

Advertisement

ಹಿರಿಯೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದ ಕೊಠಡಿಗೆ ತಹಶೀಲ್ದಾರ್ ರಾಜೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

Advertisement
Tags :
Advertisement