Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜೈಲಲ್ಲಿರುವ ದರ್ಶನ್ ನೆನೆದು ಭಾವುಕರಾದ ಚಿತ್ರದುರ್ಗದ ಗಗನಾ..!

12:49 PM Sep 23, 2024 IST | suddionenews
Advertisement

ಗಗನಾ ಬಾರಿ ಈಗ ಕರ್ನಾಟಕದಾದ್ಯಂತ ಮನೆ ಮಾತಾದ ಹೆಸರು. ಮಹಾನಟಿ ಎಂಬ ರಿಯಾಲಿಟಿ ಶೋ ಮೂಲಕ ಎಲ್ಲರಿಗೂ ಪರಿಚಿತರಾದರು. ಹೊಸದಾಗಿ ಶುರುವಾದ ಈ ಶೋಗೆ ಚಿತ್ರದುರ್ಗದಲ್ಲಿ ಆಡಿಷನ್ ನೀಡಿ, ಬೆಂಗಳೂರಿಗೆ ಬಂದು, ತನ್ನ ಮುಗ್ಧತೆಯಿಂದಾನೇ ಎಲ್ಲರನ್ನು ಸೆಳೆದವರು. ನಟನೆಯಲ್ಲಿ ಸೈ ಎನಿಸಿಕೊಂಡಿದ್ದ ಗಗನಾ ಬಾರಿಗೆ ಡ್ಯಾನ್ಸ್ ಅಷ್ಟಕ್ಕೆ ಅಷ್ಟೇ. ಕುಣಿದು ಕುಣಿದು ಬಾರೇ ಅನ್ನೋ ಸ್ಟೆಪ್ ಮಾತ್ರ ಸದಾ ಕಾಲ ಮಾಡುತ್ತಿದ್ದದ್ದು. ಇದೀಗ ದರ್ಶನ್ ಬಗ್ಗೆ ನೆನೆದು ಬೇಸರ ಹೊರ ಹಾಕಿದ್ದಾರೆ.

Advertisement

ಈ ಬಾರಿಯ ಡಿಕೆಡಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಬಾರದೆ ಇದ್ದವರಿಂದಾನೂ ಡ್ಯಾನ್ಸ್ ಮಾಡಿಸುವ ಸಾಹಸಕ್ಕೆ ಜೀ ಕನ್ನಡ ವಾಹಿನಿ ಕೈ ಹಾಕಿದೆ. ಹೀಗಾಗಿ ಮಾತಿನಲ್ಲಿಯೇ ಎಲ್ಲರನ್ನು ಮೋಡಿ ಮಾಡಿದ್ದ, ತರುಣ್ ಸುಧೀರ್ ಅವರಿಂದ ಅಡ್ವಾನ್ಸ್ ಪಡೆದಿದ್ದ ಗಗನಾ, ಈಗ ಡ್ಯಾನ್ಸ್ ನಲ್ಲೂ ಇಂಪ್ರೂವ್ ಆಗಿ ಬಿಟ್ಟಿದ್ದಾರೆ. ಡ್ಯಾನ್ಸ್ ನಲ್ಲೂ ಎಲ್ಲರಿಂದ ಹೊಗಳಿಕೆಯ ಮಾತುಗಳನ್ನು ಕೇಳಿದ್ದಾರೆ.

ನಿನ್ನೆಯ ಡಿಕೆಡಿ ಕಾರ್ಯಕ್ರಮದಲ್ಲಿ ಮಾತನಾಡುತ್ತಲೇ ಗಗನಾ ಕಣ್ಣೀರು ಹಾಕಿದರು. ದರ್ಶನ್ ವಿಚಾರ ಬಂದ ಕೂಡಲೇ ಅವರನ್ನು ನಾವೆಲ್ಲಾ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಾನು ಅವರ ಸಿನಿಮಾಗಳನ್ನು ನೋಡಿ ಇಷ್ಟ ಪಟ್ಟೆ. ವಿ ಆಲ್ ಲವ್ ಯೂ ಅಂಡ್ ಮಿಸ್ ಯೂ ಸರ್ ಎಂದಿದ್ದಾರೆ.

Advertisement

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯ ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್, ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಮುಂದಿನ ದಿನಗಳಲ್ಲಿ ದರ್ಶನ್ ಗೆ ಹೊರಗೆ ಬರ್ತಾರಾ..? ಶಿಕ್ಷೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Advertisement
Tags :
actor DarshanbengaluruchitradurgaGagan Barisuddionesuddione newsಚಿತ್ರದುರ್ಗಚಿತ್ರದುರ್ಗದ ಗಗನಾಜೈಲುದರ್ಶನ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article