For the best experience, open
https://m.suddione.com
on your mobile browser.
Advertisement

ಒನಕೆ ಓಬವ್ವ ವೃತ್ತದಲ್ಲಿ ನಾಮಫಲಕ ಸರಿಪಡಿಸಿ : ಗಣೇಶ್ ಏಕಾಂಗಿ ಪ್ರತಿಭಟನೆ

07:05 PM Jan 02, 2024 IST | suddionenews
ಒನಕೆ ಓಬವ್ವ ವೃತ್ತದಲ್ಲಿ ನಾಮಫಲಕ ಸರಿಪಡಿಸಿ   ಗಣೇಶ್ ಏಕಾಂಗಿ ಪ್ರತಿಭಟನೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.02  : ಒನಕೆ ಓಬವ್ವ ವೃತ್ತದಲ್ಲಿ ನಾಮಫಲಕ ತಿರುಗುಮುರುಗಾಗಿ ಕೆಳಗೆ ಬಿದ್ದು ಎರಡು ವರ್ಷಗಳಾಗಿದ್ದರು ಇನ್ನು ಅಳವಡಿಸಿಲ್ಲದಿರುವುದನ್ನು ವಿರೋಧಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಮಂಗಳವಾರ ನಾಮಫಲಕದ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement
Advertisement

ಸಿಮೆಂಟ್ ರಸ್ತೆ ನಿರ್ಮಿಸುವಾಗ ಒನಕೆ ಓಬವ್ವ ವೃತ್ತದ ನಾಮಫಲಕವನ್ನು ತೆಗೆಯಲಾಗಿತ್ತು. ಇದುವರೆವಿಗೂ ಮತ್ತೆ ಅಳವಡಿಸಿಲ್ಲದಿರುವುದರಿಂದ ಕೆಲವರು ಇಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಹಾಗಾಗಿ ಒನಕೆ ಓಬವ್ವ ವೃತ್ತದ ನಾಮಫಲಕವನ್ನು ಕೂಡಲೆ ಅಳವಡಿಸುವಂತೆ ಜಿಲ್ಲಾಡಳಿತ, ನಗರಸಭೆಗೆ ಗಣೇಶ್ ಮನವಿ ಮಾಡಿದರು.

Advertisement
Tags :
Advertisement