For the best experience, open
https://m.suddione.com
on your mobile browser.
Advertisement

ದರ್ಶನ್ ನೋಡಲು ಚಿತ್ರದುರ್ಗದಿಂದ ಪರಪ್ಪನ ಅಗ್ರಹಾರಕ್ಕೆ ಬಂದ ಫ್ಯಾನ್ಸ್..!

09:24 PM Jul 15, 2024 IST | suddionenews
ದರ್ಶನ್ ನೋಡಲು ಚಿತ್ರದುರ್ಗದಿಂದ ಪರಪ್ಪನ ಅಗ್ರಹಾರಕ್ಕೆ ಬಂದ ಫ್ಯಾನ್ಸ್
Advertisement

Advertisement
Advertisement

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅಂಡ್ ಟೀಂ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಅವರನ್ನು ನೋಡುವುದಕ್ಜೆ ಅವರ ಕುಟುಂಬಸ್ಥರು, ಆಪ್ತರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಚಿತ್ರದುರ್ಗದಿಂದ ಮಹಿಳಾ ಅಭಿಮಾನಿಗಳು ಸಹ ದರ್ಶನ್ ಅವರನ್ನು ನೋಡುವುದಕ್ಕೆ ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು.

Advertisement

Advertisement
Advertisement

ಕಾವ್ಯಾ ಹಾಗೂ ರಚ್ಚು ಎಂಬ ಇಬ್ಬರು ಯುವತಿಯರು ತಾವೂ ದರ್ಶನ್ ಅವರ ಅಭಿಮಾನಿಗಳೆಂದು ಹೇಳಿಕೊಂಡು ಬಂದಿದ್ದರು. ಪರಪ್ಪನ ಅಗ್ರಹಾರದ ಬಳಿ ಇಬ್ಬರು ಕಾದು ನಿಂತಿದ್ದರು. ಆದರೆ ಪೊಲೀಸರು ಅವರಿಬ್ಬರಿಗೆ ದರ್ಶನ್ ಅವರನ್ನು ನೋಡುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಬರೀ ಕುಟುಂಬಸ್ಥರಿಗಷ್ಟೇ ದರ್ಶನ್, ಭೇಟಿ ಮಾಡುವುದಕ್ಕೆ ಅವಕಾಶ ನೀಡುತ್ತಿದ್ದಾರೆ. ಸ್ನೇಹಿಯರಿಗೂ ಆಗಾಗ ಭೇಟಿಗೆ ಅವಕಾಶ ನೀಡಿದ್ದಾರೆ. ಆದರೆ ಅಭಿಮಾನಿಗಳಿಗೆ ಅವಕಾಶ ನೀಡಿಲ್ಲ.

ದರ್ಶನ್ ಅವರ ಭೇಟಿಗೆ ಅವಕಾಶ ಸಿಗದೆ ಇದ್ದಾಗ ಬೇಸರ ಮಾಡಿಕೊಂಡು ಮಾತನಾಡಿದ ಕಾವ್ಯಾ, ನಾವೂ ಡಿ ಬಾಸ್ ನೋಡಲು ಅಷ್ಟು ದೂರದಿಂದ ಬಂದಿದ್ದೇವೆ. ಅವರನ್ನು ನೋಡುವುದಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅಭಿಮಾನಿಗಳನ್ನು ಬಿಡಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ನಿಜಕ್ಕೂ ನಮಗೆ ಬೇಸರವಾಗಿದೆ ಎಂದಿದ್ದಾರೆ.

ಇಂದೇ ದಿನಕರ್ ತುಗೂದೀಪ ಅವರು ಕೂಡ ಅಣ್ಣನನ್ನು ನೋಡುವುದಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ದರ್ಶನ್ ಅವರನ್ನು ಭೇಟಿಯಾಗಿ, ಮಾತನಾಡಿಕೊಂಡು ಬಂದಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕ ದರ್ಶನ್ ಕುಟುಂಬಸ್ಥರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೂ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿಯೇ ಇರಲಿದ್ದಾರೆ.

Tags :
Advertisement