For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದ ಖ್ಯಾತ ವಕೀಲ ಮಹೇಶ್ವರಪ್ಪ ನಿಧನ

07:51 PM Mar 08, 2024 IST | suddionenews
ಚಿತ್ರದುರ್ಗದ ಖ್ಯಾತ ವಕೀಲ ಮಹೇಶ್ವರಪ್ಪ ನಿಧನ
Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.08 : ನಗರದ ಕೆಳಗೋಟೆ, ಚರ್ಚ್ ಬಡಾವಣೆ ನಿವಾಸಿ ದಾಸಯ್ಯನ ಮಾಳಗೆ ಎಂ. ಮಹೇಶ್ವರಪ್ಪ (88) ಶುಕ್ರವಾರ ನಿಧನರಾಗಿದ್ದಾರೆ.

Advertisement
Advertisement

ಮೃತರು ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಹಿರಿಯೂರು ತಾಲ್ಲೂಕು ಐಮಂಗಳ ಹೋಬಳಿಯ ದಾಸಯ್ಯನ ಮಾಳಿಗೆಯಲ್ಲಿರುವ ಜಮೀನಿನಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ ಎಂದು ವಕೀಲರಾದ ಎಂ. ಸುರೇಶ್ ತಿಳಿಸಿದ್ದಾರೆ.

Advertisement

ಅಂತಿಮ ದರ್ಶನ : ಚಿತ್ರದುರ್ಗ ನಗರದ ಕೆಳಗೋಟೆ, ಚರ್ಚ್  ಬಡಾವಣೆಯ 4 ನೇ ಕ್ರಾಸ್ ನಲ್ಲಿರುವ ಸ್ವಗೃಹದಲ್ಲಿ ಮಾರ್ಚ್  9 ರಂದು ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement
Advertisement

ಅಂತಿಮ ನಮನ : ಹಿರಿಯ ವಕೀಲ ಎಂ. ಮಹೇಶ್ವರಪ್ಪ ಇವರ ನಿಧನದಿಂದ ಅಪಾರ ನೋವು ಅಘಾತ ಉಂಟಾಗಿದೆ ಎಂದು ಮೃತರ ಆತ್ಮೀಯ ಸ್ನೇಹಿತರು ಹಾಗೂ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ  ಎನ್.ಜಿ ಕೃಷ್ಣಮೂರ್ತಿ, ಎಂ. ಸುರೇಶ್ ಇವರು ತಿಳಿಸಿ, ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

Advertisement
Tags :
Advertisement