Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಸರಾ ಅಂಬಾರಿ ಆನೆ ಸ್ಮರಣಾರ್ಥ ಅರ್ಜುನ್ ಕಪ್-2023 | ಡಿಸೆಂಬರ್ 20 ರಿಂದ 24ರವರೆಗೆ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ : ಬಿ.ಕಾಂತರಾಜ್

04:22 PM Dec 19, 2023 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 19 : ದುರ್ಗಾ ಇಲೆವೆನ್ ಕ್ರಿಕೇಟರ್ಸ್ ವತಿಯಿಂದ ಸತತವಾಗಿ 8 ಬಾರಿ ದಸರಾ ಅಂಬಾರಿಯನ್ನು ಹೊತ್ತ ಆನೆ ಅರ್ಜನನ ಸ್ಮರಣಾರ್ಥ ಅರ್ಜುನ್ ಕಪ್-2023ನ್ನು ಡಿಸೆಂಬರ್ 20 ರಿಂದ 24ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹೊನಲು ರಾಜ್ಯ ಮಟ್ಟದ ಟೆನಿಸ್ ಬಾಲ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ಮಾಜಿ ಆಧ್ಯಕ್ಷರು, ಕ್ರಿಕೇಟ್ ಪಂದ್ಯಾವಳಿಯ ಆಯೋಜಕರಲ್ಲಿ ಒಬ್ಬರಾದ ಬಿ.ಕಾಂತರಾಜ್ ತಿಳಿಸಿದರು.

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾನವ ಸ್ಮರಣಾರ್ಥ ಕ್ರಿಕೇಟ್ ಪಂದ್ಯಾವಳಿಯನ್ನು ಎಲ್ಲರು ಮಾಡುತ್ತಾರೆ ಆದರೆ ನಾವುಗಳು ಪ್ರಾಣಿಗಳ ಸ್ಮರಣಾರ್ಥ ಕ್ರಿಕೇಟ್ ಪಂದ್ಯಾವಳಿಯನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ಹಮ್ಮಿಕೊಂಡಿದ್ದೇವೆ, ಈಗಾಲೇ ಇದರಲ್ಲಿ ಆಟವಾಡಲು ಚೆನೈ ಸೇರಿದಂತೆ ರಾಜ್ಯದ ವಿವಿಧ 35 ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿವೆ. ಈ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ ಮನ್, ಉತ್ತಮ ಬೌಲರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

Advertisement

ಈ ಪಂದ್ಯಾವಳಿಯೂ ಆನೆ ಅರ್ಜುನ ಮಾತ್ರವಲ್ಲದೆ ಬಲರಾಮ ಮತ್ತು ದ್ರೋಣರ ಹೆಸರಿನಲ್ಲಿಯೂ ಸಹಾ ನಡೆಸಲಾಗುತ್ತಿದೆ . ಡಿ. 20 ರ ಸಂಜೆ 6 ಗಂಟೆಗೆ ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿರವರು ಪಂದ್ಯಾವಳಿಗೆ ಚಾಲನೆಯನ್ನು ನೀಡಲಿದ್ದಾರೆ. ಅರ್ಜುನ ಆನೆಯ ಮಾವುತರಾದ ರಾಜ ಮತ್ತು ವಿನುರವರನ್ನು ಕರೆಯಿಸಿ ಗೌರವಿಸಲಾಗುವುದು ಇದ್ದಲ್ಲದೆ ನಮ್ಮ ಕೈಲಾದ ಸಹಾಯವನ್ನು ಮಾಡಲಾಗುವುದು.

ಡಿ.23 ರಂದು ಧರ್ಮೆಂದ್ರ ಕುಮಾರ್ ರವರಿಂದ ಆನೆಗಳ ಬಗ್ಗೆ ಚಿತ್ರದುರ್ಗದ ಜನತೆಗೆ ಮಾಹಿತಿಯನ್ನು ನೀಡಲಿದ್ದಾರೆ. ಡಿ. 24 ರಂದು ಸಮಾರೋಪ ಸಮಾರಂಭದಲ್ಲಿ ಆರಣ್ಯ ಸಚಿವರಾದ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಅಂದು ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುವುದೆಂದು ಕಾಂತರಾಜ್ ತಿಳಿಸಿದರು.

ಈ ಪಂದ್ಯಾವಳಿಯಲ್ಲಿ ಗೆದ್ದ ಪ್ರಥಮ ತಂಡಕ್ಕೆ ಅರ್ಜುನ ಟ್ರೋಫಿ ಮತ್ತು 2 ಲಕ್ಷ ರೂ, ದ್ವಿತೀಯ ಸ್ಥಾನಕ್ಕೆ  ಬಲರಾಮ ಟ್ರೋಫಿ ಮತ್ತು 1 ಲಕ್ಷ ರೂ ಹಾಗೂ ತೃತೀಯ ಸ್ಥಾನಗಳಿಸಿದ ತಂಡಕ್ಕೆ ದ್ರೋಣ ಟ್ರೋಫಿ 50 ಸಾವಿರ ಬಹುಮಾನ ನೀಡಲಾಗುವುದು.  ಪಂದ್ಯಾವಳಿಯನ್ನು ವೀಕ್ಷಿಸಲು ಆಗಮಿಸುವ ಕ್ರೀಡಾ ಪ್ರೇಮಿಗಳಿಗೆ ಉತ್ತಮವಾದ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ ಅಲ್ಲದೆ ಉತ್ತಮವಾದ ಬೆಳಕಿನ ವ್ಯವಸ್ಥೆಯನ್ನು ಸಹಾ ಮಾಡಲಾಗಿದೆ ಎಂದರು.

ಗೋಷ್ಟಿಯಲ್ಲಿ ಉದ್ಯಮಿಗಳಾದ ಸುರೇಶ್ ಬಾಬು, ಗೋಪಾಲಸ್ವಾಮಿ ನಾಯಕ್, ವೀರಶೈವ ಮುಖಂಡರಾದ ಪರಮೇಶ್ (ಕಾಫಿಪುಡಿ) ಸಿದ್ದೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
AmbariArjun Cup-2023B. KantarajCommemorativeDussehraelephantState-levelTennis Ball Cricket Tournamentಅಂಬಾರಿ ಆನೆಅರ್ಜುನ್ ಕಪ್-2023ಚಿತ್ರದುರ್ಗಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಡಿಸೆಂಬರ್ದಸರಾಬಿ.ಕಾಂತರಾಜ್ಸುದ್ದಿಒನ್ಸ್ಮರಣಾರ್ಥ
Advertisement
Next Article