Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

08:10 PM May 04, 2024 IST | suddionenews
Advertisement

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರು ನೀಡಿದ ಸಂತ್ರಸ್ತೆ 6ನೇ ತರಗತಿಗೆ ವಿದ್ಯಾಬ್ಯಾಸ ಮಾಡಲು ಹಿರಿಯೂರು ತಾಲೂಕಿನಲ್ಲಿರುವ ದೊಡ್ಡಮ್ಮ ಮನೆಗೆ ಬಂದಿರುತ್ತಾಳೆ. ಈ ವೇಳೆ ವಿದ್ಯಾರ್ಥಿನಿಯ ಸಹಪಾಠಿಯ ಅಣ್ಣನ ಪರಿಚಯವಾಗಿರುತ್ತದೆ. ಸಹಪಾಠಿಯ ಅಣ್ಣನು ವಿದ್ಯಾರ್ಥಿನಿಗೆ ಚಾಕಲೇಟ್, ಬಿಸ್ಕತ್ತು ಕೊಡಿಸುವ ನೆಪದಲ್ಲಿ ವಿದ್ಯಾರ್ಥಿನಿಯ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಿದ್ದನಂತೆ. ಜೊತೆಗೆ ಎಸ್ಎಸ್ಎಲ್ಸಿ ಓದುವಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದು, ಬೇಡವೆಂದರೂ ಪಿಲಾಲಿ ಗ್ರಾಮದ ಆರೋಪಿ ಬಲವಂತವಾಗಿ 50ರಿಂದ 60 ಬಾರಿ ಸಂಭೋಗ ಮಾಡಿದ್ದನಂತೆ. ಅಲ್ಲದೆ ಆರೋಪಿ ವಿದ್ಯಾರ್ಥಿನಿ ಮೊಬೈಲ್ ಗೆ ಪ್ರತಿನಿತ್ಯ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ.

ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆಯೊಡ್ಡಿದ್ದನಂತೆ. ಆರೋಪಿ ಎಸಗಿರುವ ದೌರ್ಜನ್ಯದ ಬಗ್ಗೆ ತಾಯಿಗೆ ವಿದ್ಯಾರ್ಥಿನಿ ತಿಳಿಸಿದ್ದಾಳೆ.
ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಕರು ಆರೋಪಿ ಮನೆ ಬಳಿ ನ್ಯಾಯ ಕೇಳಲು ಹೋಗಿದ್ದರಂತೆ. ಆಗ ಆರೋಪಿಯ ತಂದೆ ತಾಯಿ ಅವರು ಆವಾಚ್ಯ ಶಬ್ದಗಳಿಂದ ನಿಂದಿಸಿ ಬೈದರಂತೆ. ಅಲ್ಲದೆ ಆರೋಪಿ ತಂದೆ ಹೇ ಸೂ..... ಎಂದು ನೀನು ನನ್ನ ಮಗನ ಜೊತೆ ಮಲಗಿರುವುದು ಸತ್ಯ, ಅದಕ್ಕೆ ಏನು ಕೊಡಬೇಕು ಹೇಳು ಕೊಡುತ್ತೆವೆ ಇಲ್ಲಿಂದ ಹೊರಟು ಹೋಗಿ ಎಂದು ನಿಮ್ಮನ್ನಾ ಸುಮ್ನೆ ಬಿಡುವುದಿಲ್ಲ ಎಂದು ಆರೋಪಿಯ ಪೋಷಕರು ವಿದ್ಯಾರ್ಥಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.

Advertisement

ಈ ವಿಚಾರವಾಗಿ ಗ್ರಾಮಸ್ಥರು ಮಾತನಾಡೋಣ ಎಂದು ಹೇಳಿದರಂತೆ. ಆದರೆ ಇದುವರೆಗೂ ಯಾವುದೇ ಮಾತುಕತೆಗೆ ಬಾರದ ಹಿನ್ನೆಲೆಯಲ್ಲಿ ತಡವಾಗಿ ಬಂದು ಹಿರಿಯೂರು ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.

Advertisement
Tags :
bengaluruchitradurgasuddionesuddione newsಅತ್ಯಾಚಾರಚಾಕಲೇಟ್ ಯುವಕಚಿತ್ರದುರ್ಗದಲಿತ ಬಾಲಕಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article