For the best experience, open
https://m.suddione.com
on your mobile browser.
Advertisement

ಹೊಳಲ್ಕೆರೆಯಲ್ಲಿ ಹೊಡೆದಾಟ : ಪುರಸಭೆ ಸದಸ್ಯರು ಮತ್ತು ಬೆಂಬಲಿಗರ ನಡುವೆ ಗಲಾಟೆ

03:44 PM Jan 11, 2024 IST | suddionenews
ಹೊಳಲ್ಕೆರೆಯಲ್ಲಿ ಹೊಡೆದಾಟ   ಪುರಸಭೆ ಸದಸ್ಯರು ಮತ್ತು ಬೆಂಬಲಿಗರ ನಡುವೆ ಗಲಾಟೆ
Advertisement

ಚಿತ್ರದುರ್ಗ, ಜ,11: ನೀರಿನ ಟ್ಯಾಂಕ್ ವಿಚಾರವಾಗಿ ಹೊಳಲ್ಕೆರೆ ಪುರಸಭೆ ಸದಸ್ಯರು ಹಾಗೂ ಬೆಂಬಲಿಗರ ನಡುವೆ ಸಿನಿಮಾ ಸ್ಟೈಲ್ ನಲ್ಲಿಯೇ ಹೊಡೆದಾಟ ನಡೆದಿದೆ. ಪರಸ್ಪರ ಕಲ್ಲು ತೂರಾಟ ನಡೆಸಿ, ದೊಣ್ಣೆಗಳಿಂದ ಹೊಡೆದಾಡಿಕೊಂಡಿರುವ ಘಟನೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Advertisement
Advertisement

Advertisement

ಗೃಹಮಂಡಳಿ ಲೇಔಟ್​ನಲ್ಲಿರುವ ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿದೆ. ಕೆ.ಸಿ.ರಮೇಶ ಅವರು ಹೊಳಲ್ಕೆರೆ ಮಾಜಿ ಶಾಸಕ ಹೆಚ್.ಆಂಜನೇಯ ಬೆಂಬಲಿಗರಾಗಿದ್ದು, ಬಿಜೆಪಿಯಿಂದ ಗೆದ್ದು ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿಸಿದ್ದರು.

Advertisement
Advertisement

ಸುಧಾ ಬಸವರಾಜ್ ಅವರು ಬಿಜೆಪಿ ಶಾಸಕ‌ ಎಂ.ಚಂದ್ರಪ್ಪ ಬೆಂಬಲಿತರಾಗಿದ್ದಾರೆ. ಸದ್ಯ ಹಾಲಿ, ಮಾಜಿ ಶಾಸಕರ‌ ಬೆಂಬಲಿಗರ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಹೊಳಲ್ಕೆರೆ ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ಎದುರಲ್ಲೇ ಎರಡು ಗುಂಪಿನ ಸದಸ್ಯರು ಹಾಗೂ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ‌ ದೂರು, ಪ್ರತಿದೂರು ದಾಖಲಾಗಿದೆ.

Advertisement
Tags :
Advertisement