For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಸಿಡಿಲಿಗೆ ಇಬ್ಬರ ಸಾವು

08:19 PM May 21, 2024 IST | suddionenews
ಚಿತ್ರದುರ್ಗ   ಸಿಡಿಲಿಗೆ ಇಬ್ಬರ ಸಾವು
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

Advertisement

ಸುದ್ದಿಒನ್, ಚಿತ್ರದುರ್ಗ, ಮೇ. 21 : ಸೋಮುವಾರ ರಾತ್ರಿ ಗುಡುಗು ಸಹಿತ ಮಳೆ ಸುರಿದ್ದಿದ್ದು ಸಿಡಿಲು ಬಡಿದು ಮಹಾರಾಷ್ಟ್ರ ಮೂಲದ ಲಕ್ಷ್ಮಿ (66) ವರ್ಷ ಮಹಿಳೆ ಸಾವನ್ನಪ್ಪಿದ್ದಾರೆ.

Advertisement

ಮಹಾರಾಷ್ಟ್ರ ದಿಂದ  ಹೊಟ್ಟೆ ಪಾಡಿಗಾಗಿ  ತಾಲ್ಲೂಕಿನ ರೇಖಲಗೆರೆ ಕೆರೆಯಾಂಗಳದಲ್ಲಿ  ಶೆಡ್ ನಿರ್ಮಾಣ ಮಾಡಿಕೊಂಡು ಕಟ್ಟಿಗೆ ಕಡಿದು ಇದ್ದಲು ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು ರಾತ್ರಿ ಸೇಡಿನಲ್ಲಿ ಮಲಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ನಾಯಕನಹಟ್ಟಿ ಪಿಎಸ್ ಐ ಶಿವಕುಮಾರ್ ಪರಶೀಲನೆ ‌ನಡೆಸಿದ್ದಾರೆ.

Advertisement
Advertisement

ಮೊಳಕಾಲ್ಮೂರು ತಾಲ್ಲೂಕಿನ ಮೇಲಿನಕಣಿವೆ ಗ್ರಾಮದಲ್ಲಿ  ಸಿಡಿಲು ಬಡಿದ ರೈತನೊಬ್ಬ ಅಸುನಿಗಿದ್ದಾನೆ.

ಮಂಗಳವಾರ ಮಧ್ಯಾಹ್ನ 2ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು ಹೊಲದಲ್ಲಿ ಹತ್ತಿ ಬೀಜ ನಾಟಿ ಮಾಡುವಾಗ ಸಿಡಿಲು ಬಡಿದಿದೆ ಸಿಡಿಲಿನ ಹೊಡೆತಕ್ಕೆ   ಮೇಗಳಕಣಿವೆ ಗ್ರಾಮದ ನಿಂಗರಾಜ್ (25)  ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Advertisement
Tags :
Advertisement