Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಕೀರ್ತಿ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಪತ್ನಿಗೆ ಮಗು ಜನನ : ವೈದ್ಯ ಮಲ್ಲಿಕಾರ್ಜುನ ಕೀರ್ತಿ ಹೇಳಿದ್ದೇನು ?

02:25 PM Oct 16, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ದರ್ಶನ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಬುಧವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗುವಿನ ಆರೋಗ್ಯದ ಬಗ್ಗೆ ಕೀರ್ತಿ ಆಸ್ಪತ್ರೆಯ ವೈದ್ಯ ಡಾ.ಮಲ್ಲಿಕಾರ್ಜುನ ಕೀರ್ತಿ ಮಾಹಿತಿ ನೀಡಿದ್ದು, ಹಲವು ಅಂಶಗಳನ್ನು ತೆರೆದಿಟ್ಟಿದ್ದಾರೆ.

Advertisement

ಮಂಗಳವಾರ ರಾತ್ರಿ ಸಹನಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಬುಧವಾರ ಬೆಳಿಗ್ಗೆ 6.55 ಕ್ಕೆ ಸಹಜ ಹೆರಿಗೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಅವಧಿ ಪೂರ್ವ ಅಂದರೆ 36 ವಾರಕ್ಕೆ ಹೆರಿಗೆಯಾದ ಕಾರಣ ಮಗುವಿನ ತೂಕ 2 ಕೆಜಿ 175 ಗ್ರಾಂ ಇದೆ. ಮಗು ಹುಟ್ಟಿದ ತಕ್ಷಣ ಅತ್ತಿದ್ದು, ಆರೋಗ್ಯವಾಗಿದೆ' ಎಂದಿದ್ದಾರೆ.

'ಸಹನಾ ಅವರು ನಮ್ಮ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದರು. ಗರ್ಭ ಚೀಲ ಸಮಸ್ಯೆಯಿದ್ದ ಕಾರಣ ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಆದರೆ ಎಲ್ಲರಿಗೂ ತಿಳಿದಂತೆ ನಡೆದ ಘಟನೆಯಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು. ಆ ವೇಳೆ ಪೌಷ್ಟಿಕಾಂಶದ ಕೊರತೆ ಎದುರಾದ ಕಾರಣ ತಾಯಿ, ಮಗುವಿನ ತೂಕ ಕಡಿಮೆಯಾಗಿತ್ತು.‌ ಸಕಲ ರೀತಿಯ ಮುಂಜಾಗ್ರತೆ ಹಾಗೂ ಚಿಕಿತ್ಸೆ ನೀಡಿದ್ದರಿಂದ ಸಹಜ ಹೆರಿಗೆಯಾಗಿದೆ. ಇನ್ನೂ ನಾಲ್ಕೈದು ದಿನ ಆಸ್ಪತ್ರೆಯಲ್ಲಿ ನೋಡಿಕೊಂಡು ಬಳಿಕ ಮನೆಗೆ ಕಳುಹಿಸಲಾಗುತ್ತದೆ' ಎಂದು ವೈದ್ಯರು ತಿಳಿಸಿದ್ದಾರೆ.

Advertisement

Advertisement
Tags :
bengaluruchitradurgadoctorkeerthi hospitalMallikarjuna KeerthiRenukaswamysuddionesuddione newswifeಚಿತ್ರದುರ್ಗಪತ್ನಿಪುತ್ರಬೆಂಗಳೂರುರೇಣುಕಾಸ್ವಾಮಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article