Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಜ್ಞಾನಪೂರ್ಣ ಶಾಲೆಯಲ್ಲಿ ಸಂಸತ್ ಚುನಾವಣೆ : ವಿದ್ಯಾರ್ಥಿಗಳಿಂದ ಅಧಿಕಾರ ಸ್ವೀಕಾರ

08:10 PM Jul 15, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 15 : ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಶಾಲಾ ಮಾದರಿ ಸಂಸತ್ ಚುನಾವಣೆ ನಡೆಯಿತು.

Advertisement

ಆಯ್ಕೆಯಾದ ಶಾಲಾ ನಾಯಕ ಮತ್ತು ನಾಯಕಿ, ಹಾಗೂ ಸಾಂಸ್ಕೃತಿಕ ,ಕ್ರೀಡಾ , ಹಾಗೂ ECO ಕ್ಲಬ್ ವಿಭಾಗದ ನಾಯಕ ಮತ್ತು ನಾಯಕಿಯರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್. ಎಲ್. ವೆಂಕಟೇಶ್ ರೆಡ್ಡಿ, ಸಹ ಕಾರ್ಯದರ್ಶಿ ಶ್ರೀಮತಿ ಸುಹಾಸಿನಿ ವೆಂಕಟೇಶ್ ರೆಡ್ಡಿ,  ಜ್ಞಾನ ಪೂರ್ಣ ಸಂಸ್ಥೆಗಳ ಆಡಳಿತ ಅಧಿಕಾರಿ ಡಾ. ಸ್ವಾಮಿ ಕೆ. ಎನ್. ಜ್ಞಾನಪೂರ್ಣ ಐಸಿಎಸ್‌ಸಿ ವಿಭಾಗದ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಜ್ಞಾನಪೂರ್ಣ ರಾಜ್ಯ ಪಠ್ಯಕ್ರಮ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಸುರೇಶ್ ಜಿ.
ದೈಹಿಕ ಶಿಕ್ಷಕರಾದ ಬಾಬು,  ಅನುಷಾ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Advertisement
Tags :
bengaluruchitradurgaJnanapoorna SchoolParliament electionsPower Acceptancestudentssuddionesuddione newsಅಧಿಕಾರ ಸ್ವೀಕಾರಚಿತ್ರದುರ್ಗಜ್ಞಾನಪೂರ್ಣ ಶಾಲೆಬೆಂಗಳೂರುವಿದ್ಯಾರ್ಥಿಸಂಸತ್ ಚುನಾವಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article