For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಪತ್ರಕರ್ತ ಸುರೇಶ್ ಬೆಳಗೆರೆಯವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ಪ್ರಶಸ್ತಿ

06:01 PM Nov 27, 2023 IST | suddionenews
ಚಿತ್ರದುರ್ಗ   ಪತ್ರಕರ್ತ ಸುರೇಶ್ ಬೆಳಗೆರೆಯವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ಪ್ರಶಸ್ತಿ
Advertisement

ಸುದ್ದಿಒನ್, ಚಿತ್ರದುರ್ಗ : ನವೆಂಬರ್.27 :ಪತ್ರಿಕಾ ರಂಗದ ಸೇವೆಯನ್ನು ಗುರುತಿಸಿ ಪತ್ರಕರ್ತ ಸುರೇಶ್ ಬೆಳಗೆರೆಯವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ರಾಜ್ಯ ಗೌರವ ಪ್ರಶಸ್ತಿ ಲಭಿಸಿದೆ.

Advertisement
Advertisement

ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಇವರ ವತಿಯಿಂದ ಹೂವಿನ ಹಡಗಲಿ ಸುಕ್ಷೇತ್ರ ಮೈಲಾರ ದಲ್ಲಿ ನಡೆಯಲಿರುವ ಕರ್ನಾಟಕ ಸಂಭ್ರಮ ಕರ್ನಾಟಕ ಗ್ರಾಮೀಣ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದ ಸೇವೆಯನ್ನು ಗುರುತಿಸಿ ಪತ್ರಕರ್ತ ಸುರೇಶಬೆಳಗೆರೆ ಇವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ರಾಜ್ಯ ಗೌರವ ಪ್ರಶಸ್ತಿ ಲಭಿಸಿದೆ. ಇಂದು ಸುಕೇತ್ರ ಮೈಲಾರದಲ್ಲಿ   ನಡೆಯಲಿರುವ  ಕನ್ನಡ   ಸಂಭ್ರಮ ಕಾರ್ಯಕ್ರಮ ದಲ್ಲಿ  ಸನ್ಮಾನಿಸಿ ಗೌರವಿಸಲಿದೆ.

Advertisement

ಸುರೇಶ ಬೆಳಗೆರೆ ಅವರ ಬಗ್ಗೆ ಕಿರು ಪರಿಚಯ :
ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದವರಾಗಿದ್ದು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಬೆಳಗೆರೆ ಡಿ ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿಪೂರ್ವ ವಿದ್ಯಾಭ್ಯಾಸ ಮುಗಿಸಿ 19.12.2006 ರಲ್ಲಿ ಖಾಸಗಿ  ಚಾನಲ್  ನಲ್ಲಿ ಸೇವೆ ಆರಂಭಿಸಿ ಅಲ್ಲಿಂದ ಇಲ್ಲಿಯವರೆ ನಿರಂತರವಾಗಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

Advertisement

ಇವರ ಸೇವೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಚಳ್ಳಕೆರೆ ಪತ್ರಿಕೋದ್ಯಮ ಸಾಧಕರ ಪ್ರಶಸ್ತಿ, ಕೊರೋನಾ ವಾರಿಯರ್ಸ್‌ ಜಿಲ್ಲಾ ಪ್ರಶಸ್ತಿ, ಹಾಗೂ ಇತ್ತಿಚೆಗೆ ಗೋವಾದ ವಾಸ್ಕೋದಲ್ಲಿ ರವೀಂದ್ರ ಕಲಾ ಭವನ ದಲ್ಲಿ ರಾಷ್ಟ್ರೀಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನ್ಯಾಷನಲ್ ಗ್ಲೋಬಲ್ ಐಕಾನ್ ಅವಾರ್ಡ್ ಸೇರಿದಂತೆ ವಿವಿಧ ಪ್ರಶಸ್ತಿಗಳು ಲಭಿಸಿವೆ.

ಇಂದು ಸುಕೇತ್ರ ಮೈಲಾರದಲ್ಲಿ ನಡೆಯುತ್ತಿರುವ ಕನ್ನಡ ನುಡಿ ಹಬ್ಬದಲ್ಲಿ  ಮೈಲಾರ ಬಸವಲಿಂಗ ಶರಣಶ್ರೀ ರಾಜ್ಯ ಗೌರವ ಪ್ರಶಸ್ತಿ ಲಭಿಸಿದೆ.

Advertisement
Tags :
Advertisement