For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಮಲ್ಲಾಪುರ ಬಳಿ ಲಾರಿ ದರೋಡೆ : ಹಣ ದೋಚಿ ಕಳ್ಳರು ಪರಾರಿ

08:51 AM Aug 22, 2024 IST | suddionenews
ಚಿತ್ರದುರ್ಗ   ಮಲ್ಲಾಪುರ ಬಳಿ ಲಾರಿ ದರೋಡೆ   ಹಣ ದೋಚಿ ಕಳ್ಳರು ಪರಾರಿ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 22: ಲಾರಿ ಚಾಲಕನನ್ನು ಬೆದರಿಸಿ ಹಣವನ್ನು ಫೋನ್ ಪೇ ಮೂಲಕ ದೋಚಿ ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಇಂದು (ಗುರುವಾರ) ಬೆಳಿಗ್ಗೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಮಲ್ಲಾಪುರದ ಬಳಿ  ತಮಿಳುನಾಡು ಮೂಲದ ಲಾರಿ ಚಾಲಕ ಲೋಗನಾಥನ್ ಮೂತ್ರವಿಸರ್ಜನೆಗೆಂದು ಲಾರಿ ನಿಲ್ಲಿಸಿದ್ದಾರೆ. ಈ ವೇಳೆ ಅಲ್ಲಿಗೆ ಐವರು ದುಷ್ಕರ್ಮಿಗಳು ಬಂದಿದ್ದು ಚಾಕು ತೋರಿಸಿ ಲಾರಿ ಚಾಲಕನನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.

Advertisement

ಲಾರಿ ಚಾಲಕನ ಬಳಿಯಿದ್ದ ಒಂದು ಸಾವಿರ ರೂಪಾಯಿಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಆತನ ಮೊಬೈಲ್ ಕಸಿದುಕೊಂಡು ಫೋನ್ ಪೇ ಮುಖಾಂತರ 9 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Tags :
Advertisement