For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಸುಜಾತ. ಡಿ ಅಖಾಡಕ್ಕೆ

06:42 PM Mar 24, 2024 IST | suddionenews
ಚಿತ್ರದುರ್ಗ ಲೋಕಸಭಾ ಕ್ಷೇತ್ರ   ಎಸ್‍ಯುಸಿಐ  ಕಮ್ಯುನಿಸ್ಟ್  ಪಕ್ಷದ ಅಭ್ಯರ್ಥಿಯಾಗಿ ಸುಜಾತ  ಡಿ ಅಖಾಡಕ್ಕೆ
Advertisement

Advertisement
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.24 :  ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸುಜಾತ. ಡಿ ಅವರನ್ನು ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದಿಂದ ಕಣಕ್ಕಿಳಿಸಲಾಗಿದೆ ಎಂದು ರಾಜ್ಯ ಮುಖಂಡರಾದ ಎಂ.ಎನ್. ಮಂಜುಳಾ ಅವರು ತಿಳಿಸಿದರು.

Advertisement
Advertisement

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

2024ರ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷ ಕೂಡ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸಲಿದೆ.
ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ  151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಈ ಬಾರಿ ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸುಜಾತ. ಡಿ ಪರಿಚಯ :
ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಮಹಿಳಾ-ಯುವಜನ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಚಿತ್ರದುರ್ಗ ಸ್ಥಳೀಯ ಸಮಿತಿ ಸದಸ್ಯರಾದ ಇವರು ಪಕ್ಷದ ಮಹಿಳಾ ಮುಂದಳವಾದ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎಐಎಂಎಸ್‍ಎಸ್)ಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಹಾಗೂ ಎಐಎಂಎಸ್‍ಎಸ್ ಸಂಘಟಿಸಿದ ಜನಪರ ಹೋರಾಟಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದ ಒಟ್ಟು 19  ಕ್ಷೇತ್ರಗಳ ಪಟ್ಟಿ ಇಂತಿದೆ :

1. ಬೆಳಗಾವಿ (2) - ಲಕ್ಷ್ಮಣ ಜಡಗಣ್ಣನವರ್
2. ಬಾಗಲಕೋಟೆ (3) - ಮಲ್ಲಿಕಾರ್ಜುನ ಹೆಚ್ ಟಿ
3. ಬಿಜಾಪುರ (4 ಎಸ್ಸಿ) - ನಾಗಜ್ಯೋತಿ
4. ಕಲಬುರ್ಗಿ( 5 ಎಸ್ಸಿ) - ಎಸ್ ಎಂ ಶರ್ಮ
5. ರಾಯಚೂರು (6 ಎಸ್ಟಿ ) - ರಾಮಲಿಂಗಪ್ಪ
6. ಕೊಪ್ಪಳ (8) - ಶರಣು ಗಡ್ಡಿ
7.ಬಳ್ಳಾರಿ (9 ಎಸ್ಟಿ) - ದೇವದಾಸ್ ಏ
8.ಹಾವೇರಿ (10 ) - ಗಂಗಾಧರ ಬಡಿಗೇರ
9. ಧಾರವಾಡ (11) - ಶರಣಬಸವ ಗೋನವಾರ
10. ಉತ್ತರ ಕನ್ನಡ( 12 ) -:ಗಣಪತಿ ವಿ. ಹೆಗಡೆ
11. ದಾವಣಗೆರೆ ( 13) - ತಿಪ್ಪೇಸ್ವಾಮಿ
12. ಚಿತ್ರದುರ್ಗ (18 ಎಸ್ಸಿ) - ಸುಜಾತ. ಡಿ
13. ತುಮಕೂರು (19) - ಎಸ್ ಎನ್ ಸ್ವಾಮಿ
14. ಮೈಸೂರು (21) - ಸುನಿಲ್ ಟಿ ಆರ್
15. ಚಾಮರಾಜನಗರ (22 ಎಸ್ಸಿ) - ಸುಮಾ ಎಸ್
16. ಬೆಂಗಳೂರು ಗ್ರಾಮಾಂತರ(23)- ಹೇಮಾವತಿ ಕೆ
17. ಬೆಂಗಳೂರು ಉತ್ತರ (24) - ನಿರ್ಮಲ ಹೆಚ್ ಎಲ್
18. ಬೆಂಗಳೂರು ಕೇಂದ್ರ (25)- ಶಿವಪ್ರಕಾಶ್ ಹೆಚ್ ಪಿ
19. ಚಿಕ್ಕಬಳ್ಳಾಪುರ (27)- ಷಣ್ಮುಗಂ

ಈ ಸಂದರ್ಭದಲ್ಲಿ ರವಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Advertisement
Tags :
Advertisement