For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್. ಎನ್. ಲೋಕೇಶ್ ಆಯ್ಕೆ

04:55 PM Mar 23, 2024 IST | suddionenews
ಚಿತ್ರದುರ್ಗ   ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್  ಎನ್  ಲೋಕೇಶ್ ಆಯ್ಕೆ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 23 : ರಾಯಲ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ, ದುರ್ಗಾ ಹೋಟೆಲ್ ಮಾಲೀಕ ಎಚ್. ಎನ್. ಲೋಕೇಶ್ ಅವರು ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಈ ಹಿಂದೆ ಅಧ್ಯಕ್ಷರಾಗಿದ್ದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದ ಡಿ.ಮಲ್ಲಿಕಾರ್ಜುನ್ ಅವರ ಅಕಾಲಿಕ ಮರಣದಿಂದ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ತೆರವಾಗಿತ್ತು.ಆದ್ದರಿಂದ ಸಂಘದ ನಿರ್ದೇಶಕರಾಗಿದ್ದ ಎಚ್.ಎನ್.ಲೋಕೇಶ್ ಅವರನ್ನು ಸಹಕಾರ ಸಂಘದ ಸದಸ್ಯರು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.‌ 2001-02 ನೇ ಸಾಲಿನಲ್ಲಿ ಕೆ.ಬಿ. ರಾಮಪ್ಪ ನವರು ಕನಕ ಪತ್ತಿನ ಸಹಕಾರ ಸಂಘವನ್ನು  ಆರಂಭಿಸಿದರು.

Advertisement
Advertisement

ಪದಾಧಿಕಾರಿಗಳ ಆಯ್ಕೆ : ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ರಾಮಪ್ಪ, ಉಪಾಧ್ಯಕ್ಷ ಓಂಕಾರಪ್ಪ, ಕಾರ್ಯದರ್ಶಿ ಷಣ್ಮುಖಪ್ಪ, ನಿರ್ದೇಶಕರಾದ ಕೆ.ಬಿ.ಕೃಷ್ಣಪ್ಪ, ಪುಷ್ಪರಾಜ್, ದೊಡ್ಡ ಲಿಂಗಪ್ಪ, ನೀಲಗಿರಿಯಪ್ಪ, ಡಿ.ಶೋಭಾ, ಈ. ಅರುಣ್‍ಕುಮಾರ್, ಸೋಮಶೇಖರ್, ನರಸಿಂಹಮಮೂರ್ತಿ, ಬಸವರಾಜಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ನಿರ್ದೇಶಕರಾಗಿ ಆರ್.ಹಾಲಪ್ಪ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

Advertisement
Tags :
Advertisement