For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಕರ್ತವ್ಯಲೋಪ : ಎಫ್‌ಡಿಎ ಅಮಾನತು

01:43 PM Aug 23, 2024 IST | suddionenews
ಚಿತ್ರದುರ್ಗ   ಕರ್ತವ್ಯಲೋಪ   ಎಫ್‌ಡಿಎ ಅಮಾನತು
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ಅಕ್ಷರ ದಾಸೋಹದ ಪ್ರಥಮ ದರ್ಜೆ ಸಹಾಯಕಿ ಅಯೇಷಾ ಸಿದ್ದಿಖಾ ಅವರನ್ನು  ಕರ್ತವ್ಯ ಲೋಪ ಎಸಗಿದ ಆಪಾದನೆ ಮೇಲೆ ಅಮಾನತುಗೊಳಿಸಿ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸಿಇಒ ಎಸ್.ಜೆ. ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ.

Advertisement
Advertisement

ಸರ್ಕಾರದ ಆದೇಶದಂತೆ ದ್ವಿ-ಲಕೋಟೆ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಾಧಿಕಾರದಿಂದ ತಾಂತ್ರಿಕ ಬಿಡ್ ತೆರೆಯಲು ಅನುಮತಿ ಪಡೆಯದೇ ಎರಡು ಲಕೋಟೆಗಳನ್ನು ಏಕಕಾಲದಲ್ಲಿ ತೆರೆದು ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ಮಾಡಿ ಕರ್ತವ್ಯ ಲೋಪ ಎಸಗುವ ಮೂಲಕ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ, ಕರ್ನಾಟಕ ನಾಗರಿಕ ಸೇವಾ (ನಡಾವಳಿಕೆ) ನಿಯಮಾವಳಿಗಳನ್ನು ಉಲ್ಲಂಘಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಲಿಖಿತ ಸಮಾಜಾಯಿಷಿಯನ್ನು ಸಲ್ಲಿಸುವಂತೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿರುತ್ತದೆ. ಅದರಂತೆ ಸಮಜಾಯಿಷಿಯನ್ನು ಸಲ್ಲಿಸುತ್ತಾ ಸಮರ್ಪಕವಾಗಿ ಉತ್ತರವನ್ನು ನೀಡಿರುವುದಿಲ್ಲ. ಈ ಕಾರಣಗಳಿಂದ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯತಿ ಸಿಇಒ ಎಸ್.ಜೆ. ಸೋಮಶೇಖರ್ ಅವರು ಆದೇಶಿದ್ದಾರೆ.

Advertisement

Advertisement
Tags :
Advertisement