For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಭೀಕರ ರಸ್ತೆ ಅಪಘಾತ ; ಅಜ್ಜಿಯ ಮೃತದೇಹ ಸಾಗಿಸುವಾಗ ಟೈರ್ ಸ್ಪೋಟ, ಕಾರು ಪಲ್ಟಿ, ಮೂವರು ಸಾವು, ನಾಲ್ವರಿಗೆ ಗಾಯ

07:52 PM Jan 19, 2024 IST | suddionenews
ಚಿತ್ರದುರ್ಗ   ಭೀಕರ ರಸ್ತೆ ಅಪಘಾತ   ಅಜ್ಜಿಯ ಮೃತದೇಹ ಸಾಗಿಸುವಾಗ ಟೈರ್ ಸ್ಪೋಟ  ಕಾರು ಪಲ್ಟಿ  ಮೂವರು ಸಾವು  ನಾಲ್ವರಿಗೆ ಗಾಯ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.19 : ಅಜ್ಜಿಯ ಮೃತದೇಹವನ್ನು ಸಾಗಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ನಡೆದಿದೆ.

Advertisement

ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದ ಅಜ್ಜಿಯನ್ನು ಅಂತ್ಯಸಂಸ್ಕಾರ ಮಾಡಲು ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದಾನಸೂರು ಗ್ರಾಮದವರಾಗಿದ್ದು ಸುರೇಶ (40), ಮಲ್ಲಿಕಾರ್ಜುನ(25) 9 ವರ್ಷದ ಭೂಮಿಕ ಈ ಘಟನೆಯಲ್ಲಿ ಮೃತಪಟ್ಟಿದ್ದು , ನಾಗಮ್ಮ(31),  ತಾಯಮ್ಮ(56) ಧನರಾಜ್(39) ಹಾಗೂ ಕಾರು ಚಾಲಕ ಶಿವು (26) ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ರಾಂಪುರ ಆಸ್ಪತ್ರೆ ದಾಖಲಿಸಲಾಗಿದೆ.

Advertisement
Advertisement

ಸುರೇಶ ಎನ್ನುವವರ ಅಜ್ಜಿ ಹುಲಿಗಮ್ಮ (66)ಇವರು ಶುಕ್ರವಾರ  ಬೆಂಗಳೂರಿನಲ್ಲಿ ಮೃತಪಟ್ಟಿದ್ದರು ಮೃತ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿರುವಾಗ ಈ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯ ಐಜಿ ತ್ಯಾಗರಾಜನ್, ಎ. ಎಸ್.ಪಿ, ಚಳ್ಳಕೆರೆ ಡಿ ವೈ ಎಸ್ ಪಿ ಟಿ.  ಬಿ. ರಾಜಣ್ಣ, ರಾಂಪುರ ಪೊಲೀಸ್ ಠಾಣೆಯ ಪಿಎಸ್‍ಐ ಪರಶುರಾಮ್ ಲಮಾಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Tags :
Advertisement