Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ಹಸು ಹಾಗು ವ್ಯಕ್ತಿ ಮೇಲೆ ಚಿರತೆ ದಾಳಿ

08:14 AM Sep 24, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 24 : ಆಹಾರ ಅರಸಿ ಕಾಡುಪ್ರಾಣಿಗಳು ನಾಡಿನತ್ತ ಬಂದು ಪ್ರಾಣಿಗಳ ಮೇಲೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ.

Advertisement

ಹಸುಗಳು ಮೇಯಿಸಿಕೊಂಡು ಬರುವಾಗ ಹಸು ಹಾಗೂ ವ್ಯಕ್ತಿ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಭಾನುವಾರ ಸಂಜೆ ತಾಲ್ಲೂಕಿನ ಬಂಡೆಹಟ್ಟಿ ಅರಣ್ಯ ಪ್ರದೇಶದಲ್ಲಿ ಘಟನೆ ಜರುಗಿದೆ.

ಬಂಡೆಹಟ್ಟಿ ಸಮೀಪ ಅರಣ್ಯ ಪ್ರದೇಶದಲ್ಲಿ ಬಂಡಿಹಟ್ಟಿ ಗ್ರಾಮದ ರಘು ಎನ್ನುವ ವ್ಯಕ್ತಿ ಹಸುಗಳು ಮೇಯಿಸಿಕೊಂಡು ಅರಣ್ಯದಿಂದ ಹಸುಗಳನ್ನ ಹೊಡೆದುಕೊಂಡು ಹಟ್ಟಿಗೆ ಬರುವಾಗ ಏಕಾಏಕಿ ಚಿರತೆ ಹಸುವಿನ ಮೇಲೆ ದಾಳಿ ಮಾಡಿದೆ. ಈ ಸಮಯದಲ್ಲಿ ಮಾಲೀಕ ರಘು ಚಿರತೆಯನ್ನು ಒಡಿಸಲು ಹಸುವಿನ ಬಳಿ ಒಡಿದಾಗ ರಘು ಮೇಲೆ ಸಹ ಚಿರತೆ ಎಗರಿ ದಾಳಿಗೆ ಮುಂದಾಗಿದ್ದಾಗ ರಸ್ತೆಯಲ್ಲಿ ಬರುತ್ತಿದ್ದ ಟ್ರಾಕ್ಟರ್ ಚಾಲಕ ಹಾಗೂ ಕುರಿಗಾಯಿಗಳು ಕಿರುಚಾಟ ನಡೆಸಿದಾಗ ವ್ಯಕ್ತಿ ಮೇಲೆ ದಾಳಿ ಮಾಡಿದೆ ಚಿರತೆ ಬಿಟ್ಟು ಅರಣ್ಯ ಪ್ರದೇಶದಲ್ಲಿ ಒಡಿಹೋಗಿದ್ದು, ರಘು ಪ್ರಾಣಪಾಯದಿಂದ ಪಾರಾಗಿದ್ದಾನೆ.

ಈ ಹಿಂದೆ ಗ್ರಾಮದ ಕುರಿ, ಮೇಕೆ, ನಾಯಿಗಳ ಮೇಲೆ ಚಿರತೆ ದಾಳಿ ಮಾಡಿದೆ, ಈಗ ಮತ್ತೆ ದಾಳಿ ಮಾಡಿರುವುದರಿಂದ ಗ್ರಾಮದ ಕುರಿಗಾಯಿಗಳು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Tags :
bengaluruchallakerechitradurgacowLeopard attackMansuddionesuddione newsಚಳ್ಳಕೆರೆಚಿತ್ರದುರ್ಗಚಿರತೆ ದಾಳಿಬೆಂಗಳೂರುವ್ಯಕ್ತಿಸುದ್ದಿಒನ್ಸುದ್ದಿಒನ್ ನ್ಯೂಸ್ಹಸು
Advertisement
Next Article