For the best experience, open
https://m.suddione.com
on your mobile browser.
Advertisement

ಮೃತ ರೇಣುಕಾಸ್ವಾಮಿ ಮನೆಗೆ ಭಾವನಾ ಬೆಳಗೆರೆ ಭೇಟಿ : ಆರೋಪಿಗಳ ಶಿಕ್ಷೆಗೆ ಒತ್ತಾಯ

07:50 PM Jun 11, 2024 IST | suddionenews
ಮೃತ ರೇಣುಕಾಸ್ವಾಮಿ ಮನೆಗೆ ಭಾವನಾ ಬೆಳಗೆರೆ ಭೇಟಿ   ಆರೋಪಿಗಳ ಶಿಕ್ಷೆಗೆ ಒತ್ತಾಯ
Advertisement

Advertisement

ಸುದ್ದಿಒನ್,  ಚಿತ್ರದುರ್ಗ, ಜೂ.11  : ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಕೊಲೆಯಾಗಿದೆ. ಈ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿದಂತೆ ಈಗಾಗಲೇ 13 ಜನರ ಬಂಧನವಾಗಿದೆ. ಆರೋಪಿಗಳನ್ನು ಕೋರ್ಟ್ ಗೂ ಹಾಜರುಪಡಿಸಲಾಗಿದೆ. ಮೃತ ರೇಣುಕಾ ಸ್ವಾಮಿಗೆ ಮದುವೆಯಾಗಿ ವರ್ಷವಷ್ಟೇ. ಹೆಂಡತಿ ಬೇರೆ ಗರ್ಭಿಣಿ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

Advertisement

ಚಿತ್ರದುರ್ಗದಲ್ಲಿರುವ ಮೃತ ರೇಣುಕಾಸ್ವಾಮಿ ಮನೆಗೆ ಭಾವನಾ ಬೆಳಗೆರೆ ಭೇಟಿ ನೀಡಿದ್ದಾರೆ. ದುಃಖದಲ್ಲಿದ್ದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮನೆಯಲ್ಲಿ ಇದ್ದ ಮೃತನ ಪತ್ನಿಗೆ ಧೈರ್ಯ ತುಂಬಿ ಸಾಂತ್ವನ ನೀಡಿದ್ದಾರೆ. ಇದೆ ವೇಳೆ ಆರೋಪಿಗಳ ಶಿಕ್ಷೆಗೆ ಆಗ್ರಹಿಸಿದ್ದಾರೆ.

Advertisement
Advertisement

ಮೃತರ ಮನೆಯ ಬಳಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಭಾವನಾ ಬೆಳಗೆರೆ ಅವರು, ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್ ಅವರು ಮೃತ ರೇಣುಕಾ ಸ್ವಾಮಿಗೆ ಹೊಡೆದಿದ್ದಾರೆ, ಹೊಡೆಸಿದ್ದಾರೆ, ಹೊಡೆಯಿರಿ ಎಂದು ಹೇಳಿದ್ದಾರೆ ಎಂದರೇ ಅವರು ಶಿಕ್ಷೆಗೆ ಅರ್ಹರು ಆಗುತ್ತಾರೆ ಎಂದು ಭಾವನಾ ತಿಳಿಸಿದರು. ಇದು ಆಗಬಾರದು. ದರ್ಶನ್ ಆಗಲಿ ಅಥವಾ ಬೇರೆ ಯಾರೇ ಆಗಲಿ ಅವರಿಗೆ ಪ್ರಾಣ ತೆಗೆಯಲು ಯಾವ ಹಕ್ಕು ಇದೆ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದೆ ಎಲ್ಲರ ಒತ್ತಾಯವಾಗಿದೆ. ರೇಣುಕಾ ಸ್ವಾಮಿಯನ್ನು ದರ್ಶನ್ ಸ್ನೇಹಿತರು ಮನಸ್ಸೋ ಇಚ್ಚೇ ತಳಿಸಿದ್ದಾರೆ. ದೇಹದ ಮೇಲೆ ಸಿಕ್ಕ ಸಿಕ್ಕ ಕಡೆ ಗಾಯ ಮಾಡಿದ್ದಾರೆ. ಮುಖಕ್ಕು ಜೋರಾಗಿ ಗುದ್ದಿದ್ದಾರೆ. ವಿಕೃತವಾಗಿ ಕೊಂದಿದ್ದಾರೆ.

Tags :
Advertisement