Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರಿನಲ್ಲಿ ಕರಡಿ ಪ್ರತ್ಯಕ್ಷ, ಆತಂಕಗೊಂಡ ಜನತೆ

12:03 PM Mar 16, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಮಾರ್ಚ್.16 : ಕಾಡಿನಲ್ಲಿರಬೇಕಾದ ಕಾಡು ಪ್ರಾಣಿಗಳು ನೀರು, ಆಹಾರವನ್ನು ಹುಡುಕಿಕೊಂಡು ಇದೀಗ ನಗರ, ಗ್ರಾಮ ಹಾಗೂ ಹಳ್ಳಿಗಳ ಒಳಗೆ ಲಗ್ಗೆ ಇಡುತ್ತಿವೆ.

Advertisement

ಅದರಂತೆ ಹಿರಿಯೂರು ನಗರದೊಳಗೆ ಕರಡಿಯೊಂದು ಓಡಾಡಿದ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

Advertisement

ನಗರದ ಹುಳಿಯಾರು ರಸ್ತೆಯ ಹರಿಶ್ಚಂದ್ರ ಘಾಟ್, ಲಕ್ಷ್ಮಮ್ಮ ಬಡಾವಣೆ, ಚಾನಲ್ ಬಳಿ ಕರಡಿ ಓಡಾಡಿರುವ ದೃಶ್ಯ ಜನರಲ್ಲಿ ಆತಂಕ ಮೂಡಿಸಿದೆ. ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ನಗರದೊಳಗೆ ಲಗ್ಗೆ ಇಟ್ಟಿದ್ದು ಇದರಿಂದ ಮಕ್ಕಳು ವೈಯೋ ವೃದ್ಧರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಹಿಡಿದು ಅನಾಹುತ ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Tags :
bearbengaluruchitradurgaHiriyur citypeoplesightingsuddionesuddione newsworriedಆತಂಕಕರಡಿಚಿತ್ರದುರ್ಗಜನತೆನಗರಪ್ರತ್ಯಕ್ಷಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article