Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪತ್ರಕರ್ತ ಸುರೇಶ್ ಬೆಳಗೆರೆಗೆ ಬಸವಲಿಂಗ ಶರಣ ಶ್ರೀ ಪ್ರಶಸ್ತಿ ಪ್ರದಾನ

07:44 AM Nov 29, 2023 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ : ಪತ್ರಿಕಾ ರಂಗದ ಸೇವೆಯನ್ನು ಗುರುತಿಸಿ ಪತ್ರಕರ್ತರಾದ ಸುರೇಶ್ ಬೆಳಗೆರೆ ಇವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ರಾಜ್ಯ ಗೌರವ ಪ್ರಶಸ್ತಿ ಹಾಗೂ ಪ್ರಗತಿಪರ ರೈತ ಡಾ. ಆರ್ ಎ ದಯಾನಂದಮೂರ್ತಿಹಾಗೂ ಖ್ಯಾತ ಮಕ್ಕಳ ತಜ್ಞ ಡಾ.ಚಂದ್ರನಾಯ್ಕ್ ಇವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ಆದರ್ಶ ದಂಪತಿ ರಾಜ್ಯ ಗೌರವ ಪ್ರಶಸ್ತಿ ಲಭಿಸಿದೆ.

Advertisement

ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಇವರ ವತಿಯಿಂದ ಹೂವಿನ ಹಡಗಲಿ ಸುಕ್ಷೇತ್ರ ಮೈಲಾರ ದಲ್ಲಿ ನಡೆದ ಕರ್ನಾಟಕ ಸಂಭ್ರಮ ಕರ್ನಾಟಕ ಗ್ರಾಮೀಣ ಕನ್ನಡ ನುಡಿ ಹಬ್ಬ ಮನಕಲ್ಲು ಮಲ್ಲೇಶ್ವರ ಸಂಸ್ಥಾನ ಮಠದ ಬಸವ ರಮಾನಂದ ಮಹಾಸ್ವಾಮಿಗಳ ಆನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಸುರೇಶ್ ಬೆಳಗೆರೆ ಇವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ರಾಜ್ಯ ಗೌರವ ಪ್ರಶಸ್ತಿ ,

ಪ್ರಗತಿಪರ ರೈತ ಆರ್ಯೆ ದಯಾನದ ಮೂರ್ತಿ ಇವರಿಗೆ ಮೈಲಾರ ಬಸವಲಿಂಗ ಶರಣ ಶ್ರೀ ಆದರ್ಶ ದಂಪತಿ ರಾಜ್ಯ ಗೌರವ ಪ್ರಶಸ್ತಿ. ಹಾಗೂ ಖ್ಯಾತ ಮಕ್ಕಳ ತಜ್ಞ ಡಾಕ್ಟರ್ ಚಂದ್ರನಾಯ್ಕ್ ಇವರಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ರೈತ ದಂಪತಿ ಟಿ ಶಾರದಮ್ಮ ಶಿಕ್ಷಕರು ಹಾಗೂ ಡಾಕ್ಟರ್ ಆರ್ ಎ ದಯಾನಂದ ಮೂರ್ತಿ ವಹಿಸಿದ್ದು ಭಾವಚಿತ್ರ ಮಂತ್ರಾಕ್ಷತೆ ರುದ್ರಮುನಿ ಸ್ವಾಮಿ ಹಿರೇಮಠ್ ಇವರು ನೆರವೇರಿಸಿದರು.

Advertisement

Advertisement
Tags :
AwardBasavalinga Sharan Shrichitradurgafeaturedjournalist Suresh Belgeresuddioneಚಿತ್ರದುರ್ಗಪತ್ರಕರ್ತ ಸುರೇಶ್ ಬೆಳಗೆರೆಪ್ರಶಸ್ತಿ ಪ್ರದಾನಬಸವಲಿಂಗ ಶರಣ ಶ್ರೀಸುದ್ದಿಒನ್
Advertisement
Next Article