Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನವೋದಯ 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

08:05 AM Oct 10, 2024 IST | suddionenews
Advertisement

 

Advertisement

ಚಿತ್ರದುರ್ಗ. ಅ.09: ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 9 ಮತ್ತು 11ನೇ ತರಗತಿ ಪ್ರವೇಶಾತಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನವಾಗಿದೆ.

9ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು 8 ತರಗತಿಯಲ್ಲಿ ಓದುತ್ತಿದ್ದು, 2010 ಮೇ 01 ರಿಂದ 2012 ಜುಲೈ 31 ಓಳಗೆ ಜನಿಸಿರಬೇಕು. 11 ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಓದುತ್ತಿದ್ದು, 2008 ಜೂನ್ 1 ರಿಂದ 2010ರ ಜುಲೈ 31ರ ನಡುವೆ ಜನಿಸಿರಬೇಕು. ಅಭ್ಯರ್ಥಿಗಳು ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು.

Advertisement

ವೆಬ್‌ಸೈಟ್ https://cbsietms.nic.in/2024/nvsix/restrationclassIX/registrationclassIX     ಹಾಗೂ   https://cbsietms.nic.in/2024/nvsix/restrationclassXI/registrationclassXI  ನಲ್ಲಿ ಅರ್ಜಿ ಸಲ್ಲಸಬಹುದು. ಆಯ್ಕೆ ಪರೀಕ್ಷೆಯನ್ನು 2025ರ ಫೆಬ್ರವರಿ 8ರಂದು ನಡೆಸಲಾಗುವುದು. ಆಯ್ಕೆ ಪರೀಕ್ಷೆಯ ವಸ್ತು ವಿಷಯ, ಮಾನದಂಡಗಳಿಗೆ ನವೋದಯ ವಿದ್ಯಾಲಯ ಸಮಿತಿ ಅಧಿಸೂಚನೆಯನ್ನು ವೀಕ್ಷಿಸುವಂತೆ ಪ್ರಾಚಾರ್ಯ ಡೇನಿಯಲ್ ರತನ್‌ಕುಮಾರ್ ತಿಳಿಸಿದ್ದಾರೆ.

Advertisement
Tags :
admissionApplication InvitationbengaluruchitradurgaNavodayasuddionesuddione newsಅರ್ಜಿ ಆಹ್ವಾನಚಿತ್ರದುರ್ಗತರಗತಿನವೋದಯಪ್ರವೇಶಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article