For the best experience, open
https://m.suddione.com
on your mobile browser.
Advertisement

ದರ್ಶನ್ ನೋಡಲು ಜೈಲಿಗೆ ನಟ-ನಟಿಯರ ಭೇಟಿ : ರೇಣುಕಾಸ್ವಾಮಿ ತಾಯಿ ಬೇಸರ..!

08:30 PM Jun 04, 2024 IST | suddionenews
ದರ್ಶನ್ ನೋಡಲು ಜೈಲಿಗೆ ನಟ ನಟಿಯರ ಭೇಟಿ   ರೇಣುಕಾಸ್ವಾಮಿ ತಾಯಿ ಬೇಸರ
Advertisement

Advertisement

ಸುದ್ದಿಒನ್,  ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹದಿನೇಳು ಮಂದಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆರಂಭದಲ್ಲಿ ದರ್ಶನ್ ಬಗ್ಗೆ ಇಂಡಸ್ಟ್ರಿ ಅವರು ಕೂಡ ಮಾತನಾಡುತ್ತಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ದರ್ಶನ್ ಜೊತೆಗೆ ಗುರುತಿಸಿಕೊಂಡಿದ್ದವರು ಜೈಲಿಗೆ ಹೋಗಿ ಬರುತ್ತಿದ್ದಾರೆ. ಪವಿತ್ರಾ ಗೌಡ ಕುಟುಂಬಸ್ಥರು, ದರ್ಶನ್ ಕುಟುಂಬಸ್ಥರು ಮತ್ತು ಆಪ್ತರು ಜೈಲಿಗೆ ಹೋಗಿ ಬರುತ್ತಿದ್ದಾರೆ. ಇನ್ನು ಕೆಲವು ಆರೋಪಿಗಳ ಪೋಷಕರು ಕೂಡ ಜೈಲಿಗೆ ಭೇಟಿ ನೀಡಿ ಆರೋಪಿಗಳನ್ನು ಮಾತನಾಡಿಸಿಕೊಂಡು ಬರುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ರೇಣುಕಾಸ್ವಾಮಿ ತಾಯಿ ಆಕ್ರೋಶದ ಮಾತುಗಳನ್ನಾಡಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ರತ್ನಪ್ರಭಾ ಅವರು, ಆರೋಪಿಗಳ ತಂದೆ-ತಾಯಿ ತಮ್ಮ ಮಕ್ಕಳನ್ನು ನೋಡಲು ಈಗ ಜೈಲಿಗೆ ಹೋಗುತ್ತಿದ್ದಾರೆ. ನಾವೂ ನಮ್ಮ ಮಗನನ್ನು ನೋಡಲು ಎಲ್ಲಿಗೆ ಹೋಗಬೇಕು. ರೇಣುಕಾಸ್ವಾಮಿ ನಮಗೆ ಮಣ್ಣು ಹಾಕಬೇಕಿತ್ತು. ಆದರೆ ಅವನಿಗೆ ನಾವೇ ಮಣ್ಣು ಹಾಕುವಂತೆ ಮಾಡಿಬಿಟ್ಟರು. ಕೊಲೆಯಾಗಿ ಒಂದು ತಿಂಗಳಾದರೂ ರೇಣುಕಾಸ್ವಾಮಿ ಹೆಂಡತಿ ಇನ್ನೂ ಗಂಡನ ನೆನಪಲ್ಲಿಯೇ ಇದ್ದಾಳೆ. ಊಟ ಎಲ್ಲಾ ಬಿಟ್ಟಿದ್ದಾಳೆ. ಅವಳ ಆರೋಗ್ಯ ಏನಾಗುತ್ತೋ, ಮಗಿವಿನ ಆರೋಗ್ಯ ಏನಾಗುತ್ತದೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ.

Advertisement

ನನ್ನ ಮಗನನ್ನು ನೋಡಬೇಕು ಅಂದ್ರು ಈಗ ಸಿಗ್ತಾ ಇಲ್ಲ. ಪೊಲೀಸರಿಗೆ ಕಂಪ್ಲೈಂಟ್ ಕೊಟ್ಟಿದ್ದರೆ ಅವನೇ‌ ಅನುಭವಿಸುತ್ತಿದ್ದ. ಆದರೆ ಭೀಕರವಾಗಿ ಹತ್ಯೆ ಮಾಡುವ ಅವಶ್ಯಕತೆ ಇರಲಿಲ್ಲ. ಸತ್ತ ಮೇಲೆ ಈಗ ಬಂದು ನಮಗೂ ಮೆಸೇಜ್ ಮಾಡ್ತಾನೆ ಅಂತ ಹೇಳ್ತಾ ಇದಾರೆ. ಇಷ್ಟು ದಿನ ಅವರೇನು ಬಾಯಿಗೆ ಕಡುಬು ಇಟ್ಟುಕೊಂಡಿದ್ರಾ..? ಎಂದು ಪ್ರಶ್ನಿಸಿದ್ದಾರೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ.

Advertisement
Advertisement

Advertisement
Tags :
Advertisement