Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎ.ಮುರಳಿ ಪುನರಾಯ್ಕೆ: ಮುಖಂಡರು ಮತ್ತು ಕಾರ್ಯಕರ್ತರಿಂದ ಅಭಿನಂದನೆ

05:33 PM Jan 15, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.15 : ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೆ ಬಾರಿಗೆ ಮರು ನೇಮಕವಾಗಿರುವ ಎ.ಮುರಳಿರವರಿಗೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಪಕ್ಷದ ಕಚೇರಿಯಲ್ಲಿ ಶಾಲು ಹೊದಿಸಿ ಅಭಿನಂದಿಸಿದರು.

ಎ.ಮುರಳಿರವರನ್ನು ಅಭಿನಂದಿಸಿ ಮಾತನಾಡಿದ ಕೆ.ಎಸ್.ನವೀನ್ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಹಳಬರನ್ನೆ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಪುನರ್ ಆಯ್ಕೆ ಮಾಡಿದೆ.
ಕಳೆದ ಅವಧಿಯ ನಿಮ್ಮ ಸಾಧನೆ ಹಾಗೂ ಪಕ್ಷ ನಿಷ್ಠೆಯನ್ನು ಗುರುತಿಸಿ ನಾಯಕರು ನಿಮಗೆ ಎರಡನೆ ಬಾರಿಗೆ ಬಿಜೆಪಿ.ಜಿಲ್ಲಾಧ್ಯಕ್ಷರ ಹುದ್ದೆ ನೀಡಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿರುವುದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಹಾರೈಸಿದರು.

ಎರಡನೆ ಬಾರಿಗೆ ನನ್ನನ್ನು ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟಿರುವುದನ್ನು ಉಳಿಸಿಕೊಂಡು ಪಕ್ಷದಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವುದಾಗಿ ನುಡಿದರು.

ಮಧುಗಿರಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಹನುಮಂತೆಗೌಡ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್‍ಸಿದ್ದಾಪುರ, ಮಾಧುರಿ ಗಿರೀಶ್,  ನರೇಂದ್ರ ಹೊನ್ನಾಳ್, ಸಂಪತ್‍ಕುಮಾರ್, ದಗ್ಗೆಶಿವಪ್ರಕಾಶ್, ನಾಗರಾಜ್ ಬೇದ್ರೆ, ಡಿ.ಕೆ.ಜಯಣ್ಣ, ಶಿವಣ್ಣಾಚಾರ್, ನವೀನ್ ಚಾಲುಕ್ಯ, ನಂದಿ ನಾಗರಾಜ್, ಶ್ಯಾಮಲ ಶಿವಪ್ರಕಾಶ್, ಕಿರಣ್‍ಕುಮಾರ್, ವೀರೇಶ್‍ಜಾಲಿಕಟ್ಟೆ, ಪರಶುರಾಮ್, ಡಾ.ಮಂಜುನಾಥ್, ರಾಮರೆಡ್ಡಿ, ಭಾರ್ಗವಿ ದ್ರಾವಿಡ್, ಬಸಮ್ಮ, ಶಂಭು, ಯಶವಂತ್, ವಿರುಪಾಕ್ಷಿ, ಮನೋಜ್ ಈ ಸಂದರ್ಭದಲ್ಲಿ ಹಾಜರಿದ್ದು, ಎ.ಮುರಳಿರವರಿಗೆ ಶುಭ ಹಾರೈಸಿದರು.

Advertisement
Tags :
A. MuraliActivistsBjpchitradurgaCongratulationsDistrict Presidentleadersre-electedsuddioneಅಭಿನಂದನೆಕಾರ್ಯಕರ್ತರುಚಿತ್ರದುರ್ಗಜಿಲ್ಲಾಧ್ಯಕ್ಷ ಎ.ಮುರಳಿಪುನರಾಯ್ಕೆಬಿಜೆಪಿಮುಖಂಡರುಸುದ್ದಿಒನ್
Advertisement
Next Article