Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಧ್ಯ ರಾತ್ರಿ ಹೊತ್ತಿ ಉರಿದ ಕಂಟೇನರ್ ಲಾರಿ : ತಪ್ಪಿದ ಬಾರೀ ಅನಾಹುತ

08:39 AM Feb 10, 2024 IST | suddionenews
Advertisement

ಸುದ್ದಿಒನ್, ಫೆಬ್ರವರಿ.10 :  ಚಲಿಸುತ್ತಿದ್ದ ಕಂಟೇನರ್ ಲಾರಿ ಟೈಯರ್ ಬ್ಲಾಸ್ಟ್ ಆಗಿ ಲಾರಿ ಹೊತ್ತಿ ಉರಿದ ಘಟನೆ  ತಾಲೂಕಿನ ಜವಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

Advertisement

ಚಿತ್ರದುರ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಮಾರ್ಗ ಮಧ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಂಬುಲೆನ್ಸ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಂಟೇನರ್ ಲಾರಿಯಲ್ಲಿ ಚಾಲಕನ ಹೆಸರು, ಎಲ್ಲಿಂದ ಬಂದಿತ್ತು, ಸರಕು ಸಾಗಣೆ ವಸ್ತುಗಳು ಏನಿತ್ತು, ಎಂಬುದರ ಬಗ್ಗೆ ತಿಳಿದು ಬರಬೇಕಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Advertisement

Advertisement
Tags :
caught firechitradurgacontainer lorryFire accidentsuddioneಕಂಟೇನರ್ ಲಾರಿಚಿತ್ರದುರ್ಗಮಧ್ಯ ರಾತ್ರಿಸುದ್ದಿಒನ್
Advertisement
Next Article